ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ, ಇತರೆ ಸರ್ಕಾರಗಳು ಇದಕ್ಕೆ ಸರಿಯಾದ ಸಾಥ್ ನೀಡಿರಲಿಲ್ಲ. ವಾಜಪೇಯಿಯವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಉತ್ತಮವಾಗುವಂತೆ ಮಾಡಿದ್ದರು. ಆದರೆ, ಈ ಹಿಂದಿದ್ದ ಸರ್ಕಾರ ಮತ್ತೆ ಶಾಂತಿ ಪರಿಸ್ಥಿತಿ ನಾಶಗೊಳ್ಳುವಂತೆ ಮಾಡಿತ್ತು. 2008ರ ಬಳಿಕ ಮೊದಲ ಬಾರಿಗೆ ಕಾಶ್ಮೀರ ಸಮಸ್ಯೆ ಬಗೆಹರಿಸುವ ವಿಶ್ವಾಸ ಜನರಲ್ಲಿ ಮೂಡತೊಡಗಿದೆ ಎಂದಿದ್ದಾರೆ.