ಈ ಕುರಿತಂತೆ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ ಅಭಯ್ ಕೃಷ್ಣ ಅವರು, ಹೇಡಿತನದ ವರ್ತನೆ ಹಾಗೂ ದುಷ್ಕೃತ್ಯವೆಸಗಿರುವವರಿಗೆ ಶೀಘ್ರದಲ್ಲಿಯೇ ತಿರುಗೇಟು ನೀಡುತ್ತೇವೆ. ತಮ್ಮ ಮಗನನ್ನು ಕಳೆದುಕೊಳ್ಳುವಿಕೆಯನ್ನು ಕಾಶ್ಮೀರ ಎಂದಿಗು ಸಹಿಸಿಕೊಳ್ಳುವುದಿಲ್ಲ. ಇದೊಂದು ಹೇಡಿತನ ಕೃತ್ಯವಾಗಿದ್ದು, ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ. ಹುತಾತ್ಮ ಯೋಧನ ಕುಟುಂಬಸ್ಥರೊಂದಿಗೆ ಇಡೀ ಸೇನೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಹೇಳಿದ್ದಾರೆ.