ಪೆಟ್ರೋಲ್ ಬಂಕ್ ಭಾನುವಾರ ರಜೆ ಮುಂದೂಡಿಕೆ, ಬುಧವಾರ ಮಾತುಕತೆ

ಮೇ 14ರಿಂದ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಸ್ಥಗೀತಗೊಳಿಸಲು ನಿರ್ಧರಿಸಿದ್ದ ಕರ್ನಾಟಕ ಸೇರಿದಂತೆ ಎಂಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮೇ 14ರಿಂದ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಸ್ಥಗೀತಗೊಳಿಸಲು ನಿರ್ಧರಿಸಿದ್ದ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ತಮ್ಮ ನಿರ್ಧಾರವನ್ನು ಹಿಂಪಡೆದಿರುವುದಾಗಿ ಶನಿವಾರ ಘೋಷಿಸಿದ್ದಾರೆ.
ಬಂಕ್ ಗಳಿಗೆ ಭಾನುವಾರ ವಾರದ ರಜೆ ನೀಡುವ ಕುರಿತಂತೆ ತೈಲ ಮಾರಾಟ ಸಂಸ್ಥೆಗಳು ಬುಧವಾರ ಪರಿಶೀಲನಾ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆವರೆಗೆ ಭಾನುವಾರದ ರಜೆಯನ್ನು ಮುಂದೂಡಲಾಗಿದೆ ಎಂದು ಅಖಿಲ ಮಹಾರಾಷ್ಟ್ರ ಪೆಟ್ರೋಲ್ ವಿತರಕರಣ ಸಂಘದ ಅಧ್ಯಕ್ಷ ಉದಯ್ ಲೋಧ್ ಅವರು ತಿಳಿಸಿದ್ದಾರೆ.
ತೈಲ ಉಳಿಸುವುದಕ್ಕಾಗಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಪುದುಚೇರಿ. ಕೇರಳ, ತೆಲಂಗಾಣ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೇ 14ರಿಂದ ಪ್ರತೀ ಭಾನುವಾರದ 24 ಗಂಟೆಗಳ  ಪೆಟ್ರೋಲ್ ಬಂಕ್ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com