ಭಾರತ ಚೀನಾದ ಒನ್ ಬೆಲ್ಟ್ ಹಾಗೂ ಒನ್ ರೋಡ್ ಸಭೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಷರೀಫ್ ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. "ಸಿಪಿಇಸಿ ಯೋಜನೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪ್ರಾದೇಶಿಕ ರಾಷ್ಟ್ರಗಳಿಗೂ ಮುಕ್ತ ಅವಕಾಶವಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ, ಸಿಪಿಇಸಿಗೆ ಭೂಗಡಿಗಳಿಲ್ಲ, ಸಿಪಿಇಸಿ ಯೋಜನೆಯನ್ನು ರಾಜಕೀಯಗೊಳಿಸಬೇಡಿ, ಚೀನಾದ ಒಬಿಒಆರ್ ನಿಂದ ಅತ್ಯುತ್ತಮ ನೆರೆಹೊರೆಯನ್ನು ನಿರ್ಮಿಸಬಹುದು ಎಂದು ನವಾಜ್ ಷರೀಫ್ ಹೇಳಿದ್ದಾರೆ