ಇತ್ತೀಚೆಗೆ ಬರ್ಕಾತಿಯವರು ನಿಷೇಧದ ನಡುವೆಯೂ ಕಾರಿನ ಮೇಲೆ ಕೆಂಪು ದೀಪ ಹಾಕಿ ಓಡಾಡಿದ್ದರು. ಮಸೀದಿ ಹೊರಗೆ ಜೈಶ್ರೀರಾಂ ಎನ್ನುವವರು ಹಿಜಡಾಗಳು, ಬಿಜೆಪಿ ಸೇರುವ ಮುಸ್ಲಿಮರನ್ನು ಥಳಿಸುವೆ ಎಂದು ಹೇಳಿದ್ದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯೂ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದರು. ಆದರೆ, ನನ್ನನ್ನು ವಜಾಗೊಳಿಸಿರುವ ಕ್ರಮ ಕಾನೂನುಬದ್ಧವಲ್ಲ. ನಾನು ಹುದ್ದೆ ಬಿಡಲ್ಲ ಎಂದು ಹೇಳಿದ್ದರು.