ಭ್ರಷ್ಟಾಚಾರ ಚಟುವಟಿಕೆಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಬಹಿರಂಗ ಪಡಿಸುತ್ತಿದ್ದರೂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ ನೀಡುವ ಬದಲು ಮೌನವಹಿಸಿದ್ದಾರೆ. ಕಳೆದ ಭಾನುವಾರ ಕೂಡ ಹವಾಲಾ ದಂಧೆಯಲ್ಲಿ ಕೇಜ್ರಿವಾಲ್ ಅವರು ಭಾಗಿಯಾಗಿದ್ದಾರೆಂದು ಹೇಳಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದೆ. ಸಾಕ್ಷ್ಯಾಧಾರ ಒದಗಿಸಿ 1 ವಾರ ಕಳೆದಿದೆ. ಆದರೂ, ಆಮ್ ಆದ್ಮಿ ಪಕ್ಷ ಮಾತ್ರ ಯಾವುದೇ ಸ್ಪಷ್ಟನೆಗಳನ್ನು ನೀಡಿಲ್ಲ. ಶೆಲ್ ಕಂಪನಿಗಳಿಗೆ ಆಪ್ ಹೇಗೆ ನಕಲಿ ಪತ್ರಗಳನ್ನು ನೀಡುತ್ತಿತ್ತು ಎಂಬುದಕ್ಕೆ ಇಂದು ನಾನು ಒದಗಿಸಿರುವ ದಾಖಲೆಗಳೇ ಸಾಕ್ಷಿ ಎಂದು ಹೇಳಿದ್ದಾರೆ.