ಆದರೆ ಕುಲಭೂಷಣ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಮಾಡಿದ ಪ್ರಯತ್ನವನ್ನು ಶಿವಸೇನೆ ಶ್ಲಾಘಿಸಿದೆ. ಹೇಗ್ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನಲ್ಲಿ ಪಾಕಿಸ್ತಾನದ ವಾದಕ್ಕೆ ಅಪಜಯ ಸಿಕ್ಕಿದೆ. ಆದರೆ ಯುದ್ಧ ಇನ್ನೂ ಕೊನೆಗೊಂಡಿಲ್ಲ. ಲಾಹೊರ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ನ್ನು ಕೊಲೆ ಮಾಡಿದ ಪಾಕಿಸ್ತಾನದ ಕೆಲಸವನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಕೋರ್ಟ್ ನ ಆದೇಶದಿಂದ ಅತ್ಯುತ್ಸಾಹ ಪಡುವುದು ಬೇಡ. ಕುಲಭೂಷಣ್ ಜಾಧವ್ ರನ್ನು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ತರುವವರೆಗೆ ಆತಂಕ ಕೊನೆಯಾಗುವುದಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ಬರೆದಿದೆ.