ಮೇ.24 ರಂದು ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ ವಿಶೇಷ ನ್ಯಾಯಾಲಯ ಆರೋಪಿಗಳಾದ ಶಿವಸೇನೆಯ ಸಂಸದ ಸತೀಶ್ ಪ್ರಧಾನ್ ಗೆ ಜಾಮೀನು ನೀಡಿದೆ. ಮೇ.23 ರಂದೇ ಪ್ರಕರಣದ ವಿಚಾರಣೆ ನಡೆಯಬೇಕಿತ್ತಾದರೂ ಪ್ರಕರಣದ ಓರ್ವ ಆರೋಪಿ ಸತೀಶ್ ಪ್ರಧಾನ್ ಕೋರ್ಟ್ ಗೆ ಹಾಜರಾಗದೇ ಇದ್ದ ಕಾರಣ ಕೋರ್ಟ್ ಮುಂದಿನ ವಿಚಾರಣೆಯನ್ನು ಮೇ.24 ಕ್ಕೆ ನಿಗದಿಪಡಿಸಿತ್ತು. ಮರುದಿನದ ವಿಚಾರಣೆಯಲ್ಲಿ ಆರೋಪಿ ಹಾಜರಾಗಿ ಶರಣಾದ ಕಾರಣ ಗೆ ಜಾಮೀನು ಮಂಜೂರು ಮಾಡಲಾಗಿದೆ.