ಗಾಂಧಿನಗರ-ಅಹಮದಾಬಾದ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಮೀಪಿಸುತ್ತಿದ್ದ ವೇಳೆ ಆ್ಯಂಬುನೆಲ್ಸ್ ಬರುವುದನ್ನು ಪ್ರಧಾನಿ ಮೋದಿಯರು ಗಮನಿಸಿದ್ದಾರೆ. ಕೂಡಲೇ ಭದ್ರತಾ ನಿಯಮಗಳನ್ನು ಮುರಿದು, ತಮ್ಮ ಬೆಂಗಾವಲು ವಾಹನಗಳನ್ನು ಬದಿಗೆ ಸರಿದು ನಿಲ್ಲುವಂತೆ ಮೋದಿ ಸೂಚಿಸಿದ್ದಾರೆ. ಆ್ಯಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರು ಇತರರಿಗೆ ಮಾದರಿಯಾಗಿದ್ದಾರೆ.