ಅಂದು ಮಾತ್ರ ಮನೀಶ್ ನ ಪ್ರಯತ್ನ ಫಲಿಸಲಿಲ್ಲ. ಸ್ಥಳೀಯ ನಿವಾಸಿಗಳು ಎಟಿಎಂಗೆ ಹಣ ವಿತ್ ಡ್ರಾ ಮಾಡಲು ಬಂದಿದ್ದ ಸಂದರ್ಭದಲ್ಲಿ ಮನೀಶ್ ಮತ್ತು ಆತನ ಸ್ನೇಹಿತರು ಎಟಿಎಂ ಯಂತ್ರ ಮುರಿದು ಅದನ್ನು ತೆರೆಯಲು ಪ್ರಯತ್ನಿಸಿದ್ದು ಗೊತ್ತಾಗಿ ಅಟ್ಟಾಡಿಸಿಕೊಂಡು ಹೋಗಿ ಹಿಡಿದಿದ್ದಾರೆ. ಮನೀಶ್ ಗುಂಪಿನವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಸ್ಥಳೀಯರು ಎಲ್ಲಾ ನಾಲ್ವರು ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿಗಳನ್ನು ಮನೀಶ್, ಆತನ ಸ್ನೇಹಿತರಾದ ವಿಷ್ಣು, ಅಂಕಿತ್ ಅಲಿಯಾಸ್ ಗಬ್ಬರ್ ಮತ್ತು ಮತ್ತೊಬ್ಬ ಪದವಿ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.