ಯೋಗಿ ಆದಿತ್ಯನಾಥ್ ಭೇಟಿ ಮಾಡಬೇಕೆ? ಹಾಗಿದ್ದರೇ ಮೊದಲು ಸ್ನಾನಮಾಡಿ

ತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವ ಮುನ್ನ ಸ್ನಾನ ಮಾಡಿಕೊಂಡು ಬರುವಂತೆ ಕುಶಿನಗರ ನಿವಾಸಿಗಳಿಗೆ ಜಿಲ್ಲಾಡಳಿತ .
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಕುಶಿನಗರ: ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವ ಮುನ್ನ ಸ್ನಾನ ಮಾಡಿಕೊಂಡು ಬರುವಂತೆ ಕುಶಿನಗರ ನಿವಾಸಿಗಳಿಗೆ ಜಿಲ್ಲಾಡಳಿತ ಸೂಚಿಸಿರುವ ಘಟನೆ ವರದಿಯಾಗಿದೆ.
ಕುಶಿನಗರ ನಿವಾಸಿಗಳ ಜೊತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭೇಟಿ ಏರ್ಪಾಡಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಸೋಪು, ಶಾಂಪು, ಪರ್ಫ್ಯೂಮ್ ನೀಡಿರುವ ಜಿಲ್ಲಾಡಳಿತ ಸಿಎಂ ಭೇಟಿಗೆ ಬರುವ ಮುನ್ನ ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿದೆ.
ಎನ್ಸೆಫಾಲಿಟಿಸ್ ರೋಗ ನಿರ್ಮೂಲನಕ್ಕಾಗಿ ಮುಸಾಹರ್ ಸಮುದಾಯದ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆದಿತ್ಯನಾಥ್ ಸಮುದಾಯದ ಐದು ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಸಿಎಂ ಬಳಿ ಮಕ್ಕಳು ಹಾಗೂ ಪೋಷಕರು ಬರುವುದರಿಂದ ಅವರು ಸ್ವಚ್ಚವಾಗಿ ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿರುವ ಜಿಲ್ಲಾಡಳಿತ ಅವರಿಗೆ ಸೋಪು ಮತ್ತು ಶಾಂಪು ನೀಡಿದೆ.
ಜೊತೆಗೆ ರಾತ್ರೋರಾತ್ರಿ ರಸ್ತೆ ಹಾಗೂ ಶೌಚಾಲಯ ಸೌಲಭ್ಯ ಒದಗಿಸಲಾಗಿದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ವಚ್ಚಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com