ಹಿಮಾಚಲಪ್ರದೇಶದ ಚುನಾವಣೆ ನಿಮಿತ್ತ ಇಂದು ಕಂಗ್ರಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಷ್ಟು ದಿನ ಹಿಮಾಚಲ ಪ್ರದೇಶವನ್ನು ಲೂಟಿ ಮಾಡಿದವರಿಗೆ ವಿದಾಯ ಹೇಳುವ ಸಮಯ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಐದು ಮಾಫಿಯಾಗಳು ಜನತೆಗೆ ಮಾರಕವಾಗಿದ್ದು, ಗಣಿಗಾರಿಕೆ ಮಾಫಿಯಾ, ಅರಣ್ಯ ಮಾಫಿಯಾ, ಡ್ರಗ್ ಮಾಫಿಯಾ, ಟೆಂಡರ್ ಮಾಫಿಯಾ ಮತ್ತು ವರ್ಗಾವಣೆ ಮಾಫಿಯಾಗಳಿಂದ ಹಿಮಾಚಲ ಪ್ರದೇಶವನ್ನು ಮುಕ್ತಗೊಳಿಸಬೇಕಿದೆ ಎಂದು ಹೇಳಿದರು.