ದೇಶ
ಉಗ್ರರಿಗೆ ಆರ್ಥಿಕ ನೆರವು: ಹಿಜ್ಬುಲ್ ಉಗ್ರ ಸಂಘಟನೆ ಮುಖ್ಯಸ್ಥನ ಪುತ್ರ ಯೂಸುಫ್ ಸರ್ಕಾರಿ ಉದ್ಯೋಗಕ್ಕೆ ಕತ್ತರಿ!
ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣ ಸಂಬಂಧ ಪ್ರಸ್ತುತ ಎನ್ ಐಎ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಪುತ್ರ ಶಾಹಿದ್ ಯೂಸುಫ್ ನನ್ನು ಸರ್ಕಾರಿ ಉದ್ಯೋಗದಿಂದ ಗೇಟ್ ಪಾಸ್ ನೀಡಲಾಗಿದೆ.
ಶ್ರೀನಗರ: ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣ ಸಂಬಂಧ ಪ್ರಸ್ತುತ ಎನ್ ಐಎ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಪುತ್ರ ಶಾಹಿದ್ ಯೂಸುಫ್ ನನ್ನು ಸರ್ಕಾರಿ ಉದ್ಯೋಗದಿಂದ ಗೇಟ್ ಪಾಸ್ ನೀಡಲಾಗಿದೆ.
ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಚನೆ ಹೊರಡಿಸಿದ್ದು, ಶಾಹಿದ್ ಯೂಸುಫ್ ನ ಕೃಷಿ ಇಲಾಖೆಯ ಉದ್ಯೋಗದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸರ್ಕಾರಿ ನಿಯಮಗಳಂತೆ ಶಾಹಿದ್ ಯೂಸುಫ್ ರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದ್ದು, ಎಫ್ ಐಆರ್ ದಾಖಲಾಗಿ ಬಂಧನಕ್ಕೀಡಾದ ವ್ಯಕ್ತಿಯನ್ನು 48 ಗಂಟೆಗಳೊಳಗೆ ಅಮಾನತು ಮಾಡಬೇಕು ಎಂಬ ನಿಯಮಗಳ ಅನುಸಾರ ಶಾಹಿದ್ ಯೂಸುಫ್ ರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಪ್ರಸ್ತುತ ಪ್ರಕರಣದಲ್ಲಿ ಕಾಶ್ಮೀರ ಸರ್ಕಾರ ಎನ್ ಐಎ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದ್ದ ಕಾರಣ ಅಮಾನತು ಪ್ರಕ್ರಿಯೆ ತಡವಾಗಿದೆ ಎಂದು ಹೇಳಲಾಗಿದೆ. 2011ರ ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣ ಸಂಬಂಧ ಇತ್ತೀಚೆಗೆ ಎನ್ ಐಎ ಅಧಿಕಾರಿಗಳು ಶಾಹಿದ್ ಯೂಸುಫ್ ನನ್ನು ಬಂಧಿಸಿದ್ದರು. ಆತನದೆ ಸೈಯ್ಯದ್ ಸಲಾಹುದ್ದೀನ್ ಕುಖ್ಯಾತ ಹಿಜ್ಬುಲ್ ಸಂಘಟನೆಯ ಮುಖ್ಯಸ್ಥನಾಗಿದ್ದು, ದೇಶದಲ್ಲಿ ನಡೆದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಮೋಸ್ಚ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ. ಪ್ರಸ್ತುತ ಆತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ