ಇಂದೋರ್ ನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಚಾಲಕನೊಬ್ಬ ಒನ್ ವೇಯಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ ಕಾರಿಗೆ ಜಾಗ ಬಿಡದೆ ನಿಂತಿದ್ದಾನೆ. ಇದರಿಂದ ಆಕ್ರೋಶಗೊಂಡ ಕಾರಿನ ಚಾಲಕ ಕಾರನ್ನು ಬೈಕ್ ಮೇಲೆ ಹತ್ತಿಸುವಂತೆ ಮುಂದಕ್ಕೆ ಓಡಿಸುತ್ತಾನೆ. ಆದರೆ ಇದಕ್ಕೆ ಬೈಕ್ ಸವಾರ ಎದುರುವುದಿಲ್ಲ. ನಂತರ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕಾರು ಚಾಲಕನಿಗೆ ದಾರಿ ಬಿಡುವಂತೆ ಹೇಳುತ್ತಾನೆ.