ಮಾರ್ಚ್ 14, 2015ರಂದು ರಾಣಾಘಾಟ್ ನ ಕಾನ್ವೆಂಟ್ ಗೆ ನುಗ್ಗಿದ ಬಾಂಗ್ಲಾದೇಶದ ಎಂಟು ಜನರ ತಂಡ, 72 ವರ್ಷದ ನನ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿ ಓರ್ವ ಆರೋಪಿ ತಪ್ಪಿತಸ್ಥ ಮತ್ತು ಇತರರು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.