ವಿಚಾರಣೆ ವೇಳೆ ಎನ್ಐಎ ಪ್ರಕರಣ ಸಂಬಂಧ ನಿಷೇಧಿತ ನೋಟುಗಳನ್ನು ಕಾನೂನಾತ್ಮಕ ಹಣವಾಗಿ ಹೇಗೆ ಬದಲಿಸಲಾಗುತ್ತಿದ್ದು ಎಂಬುದರ ಕುರಿತು ಬ್ಯಾಂಕ್ ಸಿಬ್ಬಂದಿಗಳು ಹಾಗೂ ಮತ್ತಷ್ಟು ಜನರನ್ನು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದೆ.
ಅಲ್ಲದೆ, ವಿಚಾರಣೆ ನಡೆಸುತ್ತಿದ್ದ ವೇಳೆ ಬಂಧಿತ ಆರೋಪಿಯೊಬ್ಬ ನೋಟು ನಿಷೇಧ ಮಾಡದ್ದ ಸಂದರ್ಭದಲ್ಲಿ ಹಳೆ ನೋಟುಗಳನ್ನು ಬದಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದ. ನೋಟುಗಳನ್ನು ಬದಲಿಸಲು ಒಂದು ಗ್ಯಾಂಗ್ ಕೆಲಸ ಮಾಡುತ್ತಿದ್ದು, ಇದಕ್ಕೆ ಕೆಲ ಬ್ಯಾಂಕ್ ಸಿಬ್ಬಂದಿಗಳು ಸಹಾಯ ಮಾಡುತ್ತಿರುವ ಶಂಕೆಗಳು ವ್ಯಕ್ತವಾಗಿವೆ ಎಂದು ಎನ್ಐಎ ಹೇಳಿಕೊಂಡಿದೆ.
ಮಂಗಳವಾರವಷ್ಟೇ ಕಾಶ್ಮೀರದ ಹಲವೆಡೆ ದಾಳಿ ನಡೆಸಿದ್ದ ಎನ್ಐಎ ರೂ.36.5 ಕೋಟಿ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ, ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರದ ಕೊನೌತ್ ಪ್ರದೇಶದಲ್ಲ ಜೈ ಸಿಂಗ್ ರಸ್ತೆಯಲ್ಲಿ 9 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿತ್ತು.