ವಿಶ್ವವಿದ್ಯಾಲಯದ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಹಾಗೂ ಆಹಾರ ಆಯ್ಕೆಗಳ ಕುರಿತಂತೆ ಗಮನ ಹರಿಸುವುದರ ಬದಲಿಗೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಹೇಗೆ ಉದ್ಯೋಗ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿ ಯಾವುದೇ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು ಎಂಬ ಮಾನದಂಡವನ್ನು ನಾನು ಒಪ್ಪುದ್ದೇನೆ. ಆದರೆ, ಸಸ್ಯಾಹಾರಿಗಳಿಗೆ ಮಾತ್ರ ಎಂಬ ಮಾನದಂಡವನ್ನು ನಾನು ಒಪ್ಪುವುದಿಲ್ಲ. ನೀವು ವಿಶ್ವವಿದ್ಯಾಲಯವನ್ನು ನಡೆಸುತ್ತಿದ್ದೀರೋ ಅಥವಾ ರೆಸ್ಟೋರೆಂಟ್ ನಡೆಸುತ್ತಿದ್ದೀರೋ...? ಇಂತಹ ನಿರ್ಧಾರಗಳನ್ನು ತೆಗೆದುಕೊಂಡವರಿಗೆ ಮೊದಲು ಚಿನ್ನದ ಪದಕವನ್ನು ನೀಡಬೇಕು. ನಿರ್ಧಾರ ತೆಗೆದುಕೊಂಡ ಅಧಿಕಾರಿಯನ್ನು ಮೊದಲು ಹುದ್ದೆಯಿಂದ ತೆಗೆಯಬೇಕೆಂದು ತಿಳಿಸಿದ್ದಾರೆ.