ಎನ್ ಜಿಒ ಗಳು ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಎನ್ ಜಿಒ ಗಳ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಂತೆ ಎಚ್ಚರ ವಹಿಸಲು ಎಸ್ಐಟಿ ಸೂಚನೆ ನೀಡಿದೆ. ಪಾಟ್ನಾದ ಮಾದರಿಯಲ್ಲೇ ಭೋಜ್ ಪುರದಲ್ಲಿಯೂ ಹಗರಣ ನಡೆದಿರುವ ಸಾಧ್ಯತೆಗಳು ಕಂಡುಬಂದಿದ್ದು, ಎಸ್ಐಟಿ ತಂಡ ತನಿಖೆಯನ್ನು ಮುಂದುವರೆಸಿವೆ.