ಈ ಹಿಂದೆ ಮಹಿಳೆಯರಿಗೆ ಮತ್ತು ದೆಹಲಿ ಜನಪ್ರತಿನಿಧಿಗಳಿಗೆ ಸಮ-ಬೆಸ ನೀತಿಯಲ್ಲಿ ವಿನಾಯಿತಿ ನೀಡುವಂತೆ ಕೋರಿ ದೆಹಲಿ ಸರ್ಕಾರ ಹಸಿರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಕೆ ಮಾಡಿತ್ತು. ದೆಹಲಿ ಸರ್ಕಾರದ ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆಯೇ ಈ ಬಗ್ಗೆ ತನ್ನ ಸ್ಪಷ್ಟ ನಿಲುವು ಪ್ರಕಟಿಸಿದ್ದ ಎನ್ ಜಿಟಿ, ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ತಾರ್ಕಿಕ ವಿವರಣೆಯನ್ನೂ ಕೂಡ ನೀಡಬೇಕು ಎಂದು ಹೇಳಿತ್ತು, ಅಲ್ಲದೆ ದ್ವಿಚಕ್ರ ವಾಹನಗಳಿಗೂ ವಿನಾಯಿತಿ ನೀಡುವಂತೆ ಕೋರಿದ್ದ ದೆಹಲಿ ಸರ್ಕಾರದ ಕ್ರಮವನ್ನು ಖಂಡಿಸಿದ್ದ ಎನ್ ಜಿಟಿ, ವರದಿಗಳ ಅನ್ವಯ ಕಾರುಗಳಿಗಿಂತ ದ್ವಿಚಕ್ರ ವಾಹಹನಗಳೇ ವಾತಾವರಣವನ್ನು ಹೆಚ್ಚಾಗಿ ಕಲುಷಿತಗೊಳಿಸುತ್ತಿದೆ. ಹೀಗಿರುವಾಗ ದ್ವಿಚಕ್ರ ವಾಹನಗಳಿಗೂ ವಿನಾಯಿತಿ ಕೇಳಿರುವ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿತ್ತು.