ಆತ್ಮಹತ್ಯೆಗೆ ಹಲವು ಕಾರಣಗಳಿದ್ದು, ಕಠಿಣ ಸಾಮಾಜಿಕ ರೂಢಿಗಳು, ವಿದ್ಯಾವಂತ ಮತ್ತು ಪ್ರಗತಿಶೀಲ ಯುವಕರ ಆಕಾಂಕ್ಷೆಗಳು, ಹೆಚ್ಚಿನ ಒತ್ತಡಗಳು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಭಾರತೀಯ ಮನಃಶಾಸ್ತ್ರ ಸೊಸೈಟಿಯ ಹಿರಿಯ ಸದಸ್ಯ ಎನ್.ಎನ್ ರಾಜು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉನ್ನತ ಶಿಕ್ಷಣದ ಮಟ್ಟ ಹಾಗೂ ಹೆಚ್ಚುತ್ತಿರುವ ಒತ್ತಡಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವುದರಿಂದ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿದ್ದಾರೆ.