ಹೀಗಿದ್ದರೂ, ಹಸಿರು ಪೀಠವು ಕಳೆದ ವರ್ಷ ಕೃಷ್ಣ ನದಿದಂಡೆಯಲ್ಲಿ ಪ್ರಸ್ತಾಪಿತ ರಾಜಧಾನಿ ನಿರ್ಮಾಣ ಚಟುವಟಿಕೆ ಮುಂದುವರಿಸಲು ಅನುಮತಿಸಿತು. ಪೀಠ ಅದಾಗಳೇ ಆದೇಶದಲ್ಲಿ ತಿಳಿಸಿರುವಂತೆ ನಿಯಮಗಳಿಗೆ ಒಳಪಟ್ಟು ರಾಜಧಾನಿ ನಿರ್ಮಾನವಾಗಬೇಕೆಂದು ಹೇಳಿತ್ತು. ಅರ್ಜಿದಾರರು ಪರಿಸರ ಮತ್ತು ಅರಣ್ಯ, ನಗರ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ, ಆಂದ್ರ ಪ್ರದೇಶ ಸರ್ಕಾರ ಮತ್ತು ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್ ಡಿ ಎ) ಸಚಿವಾಲಯಕ್ಕೆ ಈ ಕುರಿತು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.