ಮಾಲಿನ್ಯ ಮಟ್ಟ ಏರಿಕೆಯಾಗದಂತೆ ತಡೆಯಲು ಯೋಜನೆ ರೂಪಿಸಲು ಎಲ್ಲಾ ರಾಜ್ಯಗಳಿಗೂ 2 ವಾರಗಳ ಗಡುವು ನೀಡಿರುವ ಎನ್ ಜಿಟಿ, ಕ್ರಿಯಾಶೀಲ ಯೋಜನೆಯನ್ನು ರೂಪಿಸಲು ವಿಫಲವಾದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವೇತನದಿಂದ 5 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಎಚ್ಚರಿಕೆ ನೀಡಿದೆ. ಮಾಲಿನ್ಯ ಪ್ರಮಾಣ ಏರಿಕೆಯಾದ ಬೆನ್ನಲ್ಲೇ ಶಾಲೆಗಳಿಗೆ ರಜೆ ನೀಡಬೇಕೆಂದೂ ಸಹ ಎನ್ ಜಿಟಿ ಹೇಳಿದೆ.