ವಕೀಲ ಎಂಎಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಪದ್ಮಾವತಿ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ಇನ್ನು ಅನುಮತಿಯೇ ನೀಡಿಲ್ಲ. ಹೀಗಾಗಿ ನಾವು ಈಗ ಮಧ್ಯ ಪ್ರವೇಶಿಸಿದರೆ ಪೂರ್ವ-ನಿರ್ಧರಿತವಾಗುತ್ತದೆ ಎಂದು ಹೇಳಿ ಅರ್ಜಯನ್ನು ವಜಾಗೊಳಿಸಿದ್ದಾರೆ.