ಪರೀಕ್ಷಾರ್ಥ ಉಡಾವಣೆಗಾಗಿಯೇ ಬಂಗಾಳಕೊಲ್ಲಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಗುರಿಯನ್ನು ನಿಗದಿ ಪಡಿಸಲಾಗಿದ್ದ ಸಮಯದಲ್ಲಿ ತಲುಪುವ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯೋಜನೆ ಯಶಸ್ವಿಯಾಗಿದೆ. ಈ ಹಿಂದೆ ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿಯ ಮೇಲೆ ಮೊಬೈಲ್ ಲಾಂಚರ್ ಮೂಲಕ ಒಡಿಶಾದಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬಳಿಕ ಜಲಾಂತರ್ಗಾಮಿ ನೌಕೆ ಮತ್ತು ಸಮರ ನೌಕೆಗಳಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದೀಗ ಸುಖೋಯ್ ಯುದ್ಧ ವಿಮಾನಕ್ಕೆ ಅಳವಡಿಸಿ ಉಡಾಯಿಸಲಾಗಿದ್ದು, ಕ್ಷಿಪಣಿ ನಿಖರವಾಗಿ ಗುರಿ ತಲುಪಿದೆ.