ಉಜ್ಜೈನ್ ನಲ್ಲಿ ನಡೆದ ರಜಪೂತ ಸಮುದಾಯದಿಂದ ಗೌರವ ಸ್ವೀಕರಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, ರಾಷ್ಟ್ರಮಾತೆ ಪದ್ಮಾವತಿ ಅವರ ನೈಜ ಕಥೆಗಳನ್ನು ಶಾಲಾ ಮಕ್ಕಳಿಗೆ ಪಠ್ಯದ ರೂಪದಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಹೇಳಿದರು. ಆ ಮೂಲಕ ನಮ್ಮ ಮಕ್ಕಳು ರಾಣಿ ಪದ್ಮಾವತಿಯ ಕುರಿತಾದ ತಿರುಚಿದ ಕಥೆಗಳಿಗಿಂತ ನೈಜ ಕಥೆಗಳಿಂದ ಸ್ಪೂರ್ತಿ ಪಡೆಯುತ್ತಾರೆ ಎಂದು ಹೇಳಿದರು. ಅಲ್ಲದೆ ರಾಣಿ ಪದ್ಮಾವತಿ ನೆನಪಿನಾರ್ಥವಾಗಿ ಸ್ಮಾರಕವನ್ನೂ ಕೂಡ ನಿರ್ಮಾಣ ಮಾಡುವುದಾಗಿ ಶಿವರಾಜ್ ಸಿಂಗ್ ಚೌಹ್ವಾಣ್ ಘೋಷಣೆ ಮಾಡಿದರು.