ದೆಹಲಿಯಲ್ಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ನಾಯ್ಡು, ಚಿತ್ರವೊಂದು ಜನರ ಭಾವನೆಗಳಿಗೆ, ಕೆಲವು ಧರ್ಮಗಳಿಗೆ ಮತ್ತು ಸಮುದಾಯಗಳಿಗೆ ಧಕ್ಕೆಯನ್ನುಂಟುಮಾಡಿದೆ ಎಂದು ಜನರು ಆಪಾದಿಸುತ್ತಿದ್ದು ಇದರಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಮಾಡುತ್ತಾ ಜನರು ಅದಕ್ಕಿಂತ ಮುಂದೆ ಹೋಗಿ ಬಹುಮಾನ, ಹಣಗಳನ್ನು ಘೋಷಿಸುತ್ತಾರೆ. ಇಂತವರಲ್ಲಿ ಬೇಕಾದಷ್ಟು ಹಣವಿದೆಯೋ, ಇಲ್ಲವೋ ನನಗೆ ಸಂಶಯವಿದೆ. ಪ್ರತಿಯೊಬ್ಬರು ಒಂದು ಕೋಟಿ ಹಣ ನೀಡುವುದಾಗಿ ಘೋಷಣೆ ಮಾಡುತ್ತಾರೆ. ಹಾಗಾದರೆ ಆ ಒಂದು ಕೋಟಿ ಹಣ ನೀಡುವುದೆಂದರೆ ಅಷ್ಟು ಸುಲಭವೇ, ಇಂತಹ ವರ್ತನೆ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ಹಾಗೆಂದು ಶಾರೀರಿಕವಾಗಿ ಹಿಂಸೆ ನೀಡುವುದು, ಬೆದರಿಕೆಯೊಡ್ಡುವುದು, ಕಾನೂನನ್ನು ನಮ್ಮ ಇಷ್ಟದಂತೆ ಕೈಗೆತ್ತಿಕೊಂಡು ಕಾನೂನನ್ನು ಕಡೆಗಣಿಸುವುದು ಬೇಡ ಎಂದು ಸಲಹೆ ನೀಡಿದರು.