ರಾಜ್ಯದಲ್ಲಿ ಮರಳುಗಾರಿಕೆ ಸ್ಥಗಿತಗೊಳಿಸಿ, ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಿ

ಮುಂದಿನ ಆರು ತಿಂಗಳ ಒಳಗೆ ರಾಜ್ಯದಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈ ಕೋರ್ಟ್‌ನ ಮದುರೈ ನ್ಯಾಯಪೀಠ........
ಮರಳುಗಾರಿಕೆ
ಮರಳುಗಾರಿಕೆ
Updated on
ಮಧುರೈ: ಮುಂದಿನ ಆರು ತಿಂಗಳ ಒಳಗೆ ರಾಜ್ಯದಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈ ಕೋರ್ಟ್‌ನ ಮದುರೈ ನ್ಯಾಯಪೀಠವು ಆದೇಶಿಸಿದೆ. ಇದಕ್ಕೆ ಬದಲಾಗಿ ರಾಜ್ಯಕ್ಕೆ ಅಗತ್ಯವಾದ ಮರಳನ್ನು ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವಂತೆ ಅದು ಸೂಚಿಸಿದೆ.
ವಿದೇಶದಿಂದ ಆಮದು ಮಾಡಿಕೊಳ್ಳುವ ಮರಳಿನ ನಿರ್ವಹಣೆಗೆ ಅಗತ್ಯ ನಿಯಮಗಳನ್ನು ಸರ್ಕಾರ ರೂಪಿಸಬೇಕು. ಇದರೊಡನೆ ಅಕ್ರಮ ಮರಳುಗಾರಿಕೆ ಮತ್ತು ಮರಳಿನ ಸಾಗಣೆಯನ್ನು ತಡೆಯಲು ಚೆಕ್‌ ಪೋಸ್ಟ್‌ ಪ್ರಾರಂಭಿಸಬೇಕು ಎಂದು ನ್ಯಾಯಮೂರ್ತಿ ಆರ್‌.ಮಹದೇವನ್‌ ಸೂಚಿಸಿದರು.
ಪರಿಸರ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಗ್ರಾನೈಟ್‌ ಹಾಗೂ ಇತರೆ ರೀತಿಯ ಗಣಿಗಾರಿಕೆಯನ್ನು ನಿರ್ದಿಷ್ಟ ಅವಧಿಯಲ್ಲಿ ಮುಚ್ಚಬೇಕು. ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬಹುದಾದ ಮರಳು ಹಾಗೂ ಖನಿಜಗಳನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿಸಲು ಭೂವಿಜ್ಞಾನ ಪರಿಣಿತರ ತಂಡವನ್ನು ರಚಿಸಲು ನ್ಯಾಯಾಲಯವು ಆದೇಶಿಸಿದೆ.
ಮಲೇಷ್ಯಾದಿಂದ ಆಮದು ಮಾಡಿಕೊಂಡಿದ್ದ ಮರಳನ್ನು ಎಂ.ಆರ್‌.ಎಂ ರಾಮಯ್ಯ ಎಂಟರ್‌ ಪ್ರೈಸಸ್‌ ಲಾರಿಗಳ ಮೂಲಕ ಸಾಗಿಸುವಾಗ ತಮಿಳುನಾಡಿನ ಪೊಲೀಸರು ವಶಕ್ಕೆ ಪಡೆದು, ಅನಧಿಕೃತ ಮರಳು ಸಾಗಾಣಿಕಾ ಆರೋಪ ಹೊರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com