ಇತ್ತೀಚಿಗಷ್ಟೇ ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಸಿ ಶ್ರೀನಿವಾಸನ್ ಅವರು, ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಾವು ಯಾರೂ ಅವರನ್ನು ನೋಡಿಲ್ಲ. ವಿಕೆ ಶಶಿಕಲಾ ಅವರ ಭಯದಿಂದಾಗಿ ಆ ವೇಳೆ ನೋಡಿದ್ದಾಗಿ ನಾವು ಸುಳ್ಳು ಹೇಳಿದ್ದೇವೆ ಎಂದಿದ್ದರು. ಆದರೆ ಮತ್ತೊಬ್ಬ ಸಚಿವ ಸೆಲ್ಲೂರ್ ರಾಜು, ಎಲ್ಲಾ ಸಚಿವರು ಜಯಲಲಿತಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು ಎಂದಿದ್ದಾರೆ.