ಮೋಹನ್ ದಾಸ್ ಕರಮಚಂದ ಗಾಂಧಿಯವರು ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು. ಭಾರತದ ರಾಜಕೀಯ ಮತ್ತು ಧಾರ್ಮಿಕ ಮುಖಂಡರಾಗಿದ್ದ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯ ಮುಂದಾಳತ್ವ ವಹಿಸಿದ್ದರು. ಅವರ ಅಹಿಂಸಾ ಚಳವಳಿಯಾದ ಸತ್ಯಾಗ್ರಹ ಭಾರೀ ಜನಪ್ರಿಯತೆ ಗಳಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅಹಿಂಸಾತ್ಮಕ ನಾಗರಿಕ ಅಸಹಕಾರಕ್ಕೆ ಗಾಂಧೀಜಿ ಹೆಸರುವಾಸಿಯಾದರು. 1922ರಲ್ಲಿ ಅಸಹಕಾರ ಚಳವಳಿ ಮತ್ತು 1030ರ ಮಾರ್ಚ್ 12ರಂದು ನಡೆಸಿದ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಸತ್ಯಾಗ್ರಹ ಕೂಡ ಜನಪ್ರಿಯ.