ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಕೊನೆಗೂ ಜುಪಾಡು ಬಂಗ್ಲೋ ಮಾರ್ಗದಲ್ಲಿ ಬಸ್ ಪತ್ತೆಯಾಗಿದೆ. ಮುಖ್ಯ ಪೊಲೀಸ್ ಪೇದೆ ಕೆ.ವೆಂಕಟರಮಣ ಹಾಗೂ ಇನ್ನಿತರ ಪೇದೆಗಳು ಬಸ್ ನ್ನು ಬೆನ್ನಟ್ಟಿದ್ದಾರೆ. ಸಿಕ್ಕಿಬಿದ್ದ ಬಸ್ ಕಳ್ಳ ಶ್ರೀನಿವಾಸ್ (30) ಪೊಲೀಸ್ ಪೇದೆಗಳ ಬೈಕ್ ಮೇಲೆ ಬಸ್ ನ್ನು ಚಲಾಯಿಸಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕಳ್ಳನ ಯತ್ನ ವಿಫಲವಾಗಿದ್ದು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.