ಪಂಚಕುಲದಲ್ಲಿ ಹಿಂಸಾಚಾರ ಸೃಷ್ಟಿಸಲು ರೂ.1.25 ಕೋಟಿ ನೀಡಿದ್ದ ಹನಿಪ್ರೀತ್!

ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಪಂಚಕುಲದಲ್ಲಿ ಹಿಂಸಾಚಾ ಸೃಷ್ಟಿಸುವ ಸಲುವಾಗಿ ಹನಿಪ್ರೀತ್...
ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಹನಿಪ್ರೀತ್
ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಹನಿಪ್ರೀತ್
Updated on
ಚಂಡೀಗಢ: ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಪಂಚಕುಲದಲ್ಲಿ ಹಿಂಸಾಚಾ ಸೃಷ್ಟಿಸುವ ಸಲುವಾಗಿ ಹನಿಪ್ರೀತ್ ಇನ್ಸಾನ್ ಬರೋಬ್ಬರಿ ರೂ.1.25 ಕೋಟಿ ಹಣವನ್ನು ನೀಡಿದ್ದಳು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 
ಗುರ್ಮಿತ್ ರಾಮ್ ರಹೀಮ್ ಚಾಲಕ ರಾಕೇಶ್ ಕುಮಾರ್ ಪ್ರಸ್ತತು ವಿಶೇಷ ತನಿಖಾ ದಳದ ವಶದಲ್ಲಿದ್ದು, ಅಧಿಕಾರಿಗಳು ರಾಕೇಶ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 
ವಿಚಾರಣೆ ವೇಳೆ ಗುರ್ಮಿತ್ ವಿರುದ್ಧ ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಹಿಂಸಾಚಾರ ಸೃಷ್ಟಿಸಲು ಹನಿಪ್ರೀತ್ ರೂ.1.25 ಕೋಟಿ ಹಣವನ್ನು ಸಂದಾಯ ಮಾಡಿದ್ದಳು ಎಂದು ಹೇಳಿಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 
ಪಂಚಕುಲದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರ ಕುರಿತಂತೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪೊಲೀಸ್ ಆಯುಕ್ತ ಎ.ಎಸ್. ಚಾವ್ಲಾ ಅವರು, ಪಂಚಕುಲ ಹಿಂಸಾಚಾರದಲ್ಲಿ ಹನಿಪ್ರೀತ್ ಕೈವಾಡವಿರುವ ಕುರಿತಂತೆ ನಮಗೆ ಬಲವಾದ ಸಾಕ್ಷ್ಯಾಧಾರಗಳು ದೊರಕಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com