ವಿಮಾನ ನಿಲ್ದಾಣದಲ್ಲಿ ಜನರ ಪ್ರತಿಕ್ರಿಯೆ, ಗೌರವಗಳನ್ನು ಕಂಡು ಇಡೀ ಸೇನೆ ಬಹಳ ಸಂತಸವನ್ನು ವ್ಯಕ್ತಪಡಿಸಿದೆ. ಜನರ ಈ ರೀತಿಯ ಪ್ರತಿಕ್ರಿಯೆಗಳು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೇನೆಯನ್ನು ಪ್ರೇರೇಪಿಸುತ್ತದೆ ಎದು ಸಿಆರ್'ಪಿಎಫ್ ಡಿಜಿ ರಾಜೀವ್ ರಾಯ್ ಭಟ್ನಗರ್ ಹೇಳಿದ್ದಾರೆ.
ದೇಶಕ್ಕಾಗಿ ಸೇನೆ ಸಲ್ಲಿಸುತ್ತಿರುವ ಸೇವೆ ಹಾಗೂ ತ್ಯಾಗ, ಬಲಿದಾನಗಳಿಂದಾಗಿ ಜನರು ಗೌರವ ಸಲ್ಲಿಸುತ್ತಿದ್ದಾರೆಂದು ತಿಳಿಸಿದ್ದಾರೆ.
166 ಬೆಟಾಲಿಯನ್ ಪಡೆದ ಕಮಾಂಡಿಂಗ್ ಅಧಿಕಾರಿ ಆಶೀಶ್ ಕುಮಾರ್ ಜಾ ಮಾತನಾಡಿ, ಯೋಧರಿಗೆ ಈ ರೀತಿಯ ಪ್ರೋತ್ಸಾಗಳು ಬೇಕಿದೆ. ಈ ರೀತಿಯ ಪ್ರತಿಕ್ರಿಯೆಗಳು ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.