ಗುರುದಾಸ್ಪುರ: ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರತಿಷ್ಟೆಯ ಕಣವಾಗಿದ್ದ ಪಂಜಾಬ್ ನ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ ಗೆಲುವಿಗೆ ಸಚಿವ ನವಜೋತ್ ಸಿಂಗ್ ಸಿಧು ಹರ್ಷ ವ್ಯಕ್ತಪಡಿಸಿದ್ದಾರೆ.
'ಇದು ಮತದಾರರು ರೆಡ್ ರಿಬ್ಬನ್ನನಲ್ಲಿ ಕಟ್ಟಿ ಭವಿಷ್ಯದ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರ ಕೈಗೆ ನೀಡಿದ ದೊಡ್ಡ ದೀಪಾವಳಿ ಗಿಫ್ಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.