ದೇವಸ್ಥಾನಗಳ ಅರ್ಚಕರು ಮತ್ತು ಪುರೋಹಿತರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಕನ್ಯಾಪಿತೃಗಳು ಹಿಂಜರಿಯುತ್ತಾರೆ. ಅರ್ಚಕರ ಆದಾಯ ಕಡಿಮೆ ಎನ್ನುವುದು ಒಂದು ಕಾರಣ ಎಂದು ಮನಗಂದ ಸರ್ಕಾರ, ಅರ್ಚಕರನ್ನು ವರಿಸಲು ಮುಂದಾದ ವಧುವಿಗೆ 3 ಲಕ್ಷ ಆಫರ್ ನೀಡುವುದಾಗಿ ಘೋಷಿಸಿದೆ. ಜತೆಗೆ , ಮದುವೆ ಖರ್ಚಿಗಾಗಿ 1 ಲಕ್ಷ ರೂ. ಹೆಣ್ಣಿನ ಮನೆಯವರಿಗೆ ನೀದಲು ಸರ್ಕಾರ ನಿರ್ಧರಿಸಿದೆ.