ಒಡಿಶಾ: ನಕ್ಸಲರ ಅಟ್ಟಹಾಸ, ಮಾವೋವಾದಿಗಳಿಂದ ಲಾಂಚ್ ಚಾಲಕನ ಹತ್ಯೆ

: ಮಾವೋವಾದಿ ನಕ್ಸಲರು ಒಡಿಶಾದ ಚಿತ್ರಕುಂಡ ಜಲಾಶಯದ ಬಳಿ ಸ್ಥಳೀಯರ ಸಮ್ಮುಖದಲ್ಲಿಯೇ ಇಂದು 45ರ ಹರೆಯದ ಲಾಂಚ್ ಚಾಲಕನನ್ನು ಗುಂಡಿಟ್ಟು ಕೊಂದಿದ್ದಾರೆ.
ಒಡಿಶಾ: ನಕ್ಸಲರ ಅಟ್ಟಹಾಸ, ಮಾವೋವಾದಿಗಳಿಂದ ಲಾಂಚ್ ಚಾಲಕನ ಹತ್ಯೆ
ಒಡಿಶಾ: ನಕ್ಸಲರ ಅಟ್ಟಹಾಸ, ಮಾವೋವಾದಿಗಳಿಂದ ಲಾಂಚ್ ಚಾಲಕನ ಹತ್ಯೆ
Updated on
ಮಾಲ್ಕಂಗಿರಿ: ಮಾವೋವಾದಿ ನಕ್ಸಲರು ಒಡಿಶಾದ ಚಿತ್ರಕುಂಡ ಜಲಾಶಯದ ಬಳಿ ಸ್ಥಳೀಯರ ಸಮ್ಮುಖದಲ್ಲಿಯೇ ಇಂದು 45ರ ಹರೆಯದ ಲಾಂಚ್ ಚಾಲಕನನ್ನು ಗುಂಡಿಟ್ಟು ಕೊಂದಿದ್ದಾರೆ. ಈ ಮುಖೇನ ಭದ್ರತಾ ಪಡೆಗಳಿಗೆ ಗಂಭೀರ ಸವಾಲನ್ನು ಒಡ್ಡಿದ್ದಾರೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಗೆ ಎಚ್ಚರಿಕೆ ನೀಡುವ ಸಲುವಾಗಿ ಲಾಂಚ್ ನ ಚಾಲಕ ಸಾಮ್ ಪಾಂಗಿ ಅವರ ಹತ್ಯೆ ನಡೆದಿದೆ ಎನ್ನಲಾಗಿದ್ದು ಹತ್ಯೆ ನಡೆಸಿದ ಮಾವೋವಾದಿಗಳು ಲಾಂಚ್ ನೊಂದಿಗೆ ಪರಾರಿಯಾಗಿದ್ದಾರೆ. ಸುಮಾರು ಹನ್ನೆರಡಕ್ಕೂ ಹೆಚ್ಚು ಅಂಗಡಿಗಳಿದ್ದ ಚಿತ್ರಕುಂದದ ಸ್ಪಿಲ್ ವೇ ಲಾಂಚ್ ಗಾಟ್ ನಲ್ಲಿ ಈ ಘಟನೆ ನಡೆದಿದೆ.
ಎಂಟು ಮಂದಿ ಮಾವೋವಾದಿಗಳು ಹಡಗಿನಲ್ಲಿ ಬಂದಿದ್ದು, ಅವರಲ್ಲಿ ಇಬ್ಬರು ಕೆಲಗಿಳಿದು ಪಾಂಗಿ ಅವರನ್ನು ಕೊಂದು ಹಾಕಿದ್ದಾರೆ. ಆ ಬಳಿಕ ಭದ್ರತಾ ಪಡೆಗಳಿಗೆ ಎಚ್ಚರಿಕೆಯನ್ನು ನೀಡಿ ಲಾಂಚ್ ನ್ನು ತೆಗೆದುಕೊಂಡ ಆ ಇಬ್ಬರನ್ನು ಉಳಿದ ಮತ್ತು ಆರು ಮಂದಿ ತಮ್ಮ ದೋಣಿಯಲ್ಲಿ ಹಿಂಬಾಲಿಸಿದರು.
ಸಿಪಿಐ (ಮಾವೋವಾದಿ) ಕೋರಪುಟ್ ಮುಖ್ಯಸ್ಥ ಉದಯ್ ಈ ಹತ್ಯೆಯ ರೂವಾರಿಗಳೆಂದು ಎಂದು ಮೂಲಗಳು ತಿಳಿಸಿವೆ.
ಪಾಂಗಿ ಅವರು ಪೋಲಿಸ್ ಮಾಹಿತಿದಾರರೆಂದು ತಿಳಿದ ಮಾವೋವಾದಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಒಡಿಶಾದ ಈ ಭಾಗಗಳಲ್ಲಿ ಮಾವೋವಾದಿಗಳು ಜಲಮಾರ್ಗದ ಮೂಲಕ ದಾಳಿ ನದೆಸುತ್ತಿರುವುದು ಬಿಎಸ್ ಎಫ್  ಗೆ ಬಹುದೊಡ್ದ ಸವಾಲಾಗಿದೆ. ಅ.16 ರಂದು ಮಾವೋವಾದಿಗಳು ಕೋಟಾಗೋಡಾ ಘಾಟ್ ಬಳಿ ಎರಡು ಬೋಟ್ ಗಳನ್ನು ಲೂಟಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com