ಮಹಾತ್ಮ ಗಾಂಧಿ ಮತ್ತು ನೆಹರು 'ಕಸ'ದಂತೆ: ಬಿಜೆಪಿ ಸಂಸದನ ವಿವಾದಾಸ್ಪದ ಹೇಳಿಕೆ

ಮಹಾತ್ಮ ಗಾಂಧಿ, ಜವಹರ್ ಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಕಸದಂತೆ ಎಂದು ಅಸ್ಸಾಂ ಬಿಜೆಪಿ ಶಾಸಕ ಕಾಮಾಕ್ಯ ಪ್ರಸಾದ್ ಟಸ್ಸಾ ...
ಮಹಾತ್ಮ ಗಾಂಧಿ ಮತ್ತು ನೆಹರು (ಸಂಗ್ರಹ ಚಿತ್ರ)
ಮಹಾತ್ಮ ಗಾಂಧಿ ಮತ್ತು ನೆಹರು (ಸಂಗ್ರಹ ಚಿತ್ರ)
Updated on
ಗುವಾಹತಿ:  ಮಹಾತ್ಮ ಗಾಂಧಿ, ಜವಹರ್ ಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಕಸದಂತೆ ಎಂದು ಅಸ್ಸಾಂ ಬಿಜೆಪಿ ಶಾಸಕ ಕಾಮಾಕ್ಯ ಪ್ರಸಾದ್ ಟಸ್ಸಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 
ಬಿಜೆಪಿ ಸಂಸದರ ಹೇಳಿಕೆ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಎಎಫ್ಆರ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದೆ. ಜೋಹ್ರಾತ್ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಟಸ್ಸಾ ಪೂರ್ವ ಅಸ್ಸಾಮ್ ನ ಚರಾಯಾಡೋ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. 
ಆರ್ ಎಸ್ ಎಸ್ ಮುಖಂಡ ದೀನ್   ದಯಾಳ್  ಉಪಾಧ್ಯ ಅವರ ತತ್ವ ಸಿದ್ಧಾಂತಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ, ಗಾಂಧಿ ಮತ್ತು ನೆಹರು ಜನರ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಹೇಳಿದ್ದಾರೆ,  ಟಸ್ಸಾ ಅವರು ರ್ಯಾಲಿಯಲ್ಲಿ ಭಾಷಣ ಮಾಡುವಾಗ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಉಪಸ್ಥಿತರಿದ್ದರು.
ಇನ್ನೂ, ಟಸ್ಸಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುವಾಹಟಿಯಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿಯಿಂದ ಅಮಾನತು ಗೊಳಿಸಬೇಕು ಹಾಗೂ ಬಂಧಿಸಬೇಕು ಎಂದು ಒತ್ತಾಯಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com