ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯಲ್ಲಿರುವ ಇಬ್ರಾಹಿಂಪುರ್ ಪುಟ್ಟ ಗ್ರಾಮದಲ್ಲಿ 1,200 ಮಂದಿ ವಾಸವಾಗಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಈ ಗ್ರಾಮದ ಜನರು ಆಟೋ ದರ ಪಾವತಿಸಲು ಹಾಗೂ ತಿಂದಿ ಖರೀದಿಸಲೂ ನಗದು ಉಪಯೋಗಿಸುತ್ತಿರಲಿಲ್ಲ. ಗ್ರಾಮದ ಎಲ್ಲಾ ಅಂಗಡಿ ಮಾಲೀಕರ ಬಳಿಯೂ ಬ್ಯಾಂಕ್ ಒದಗಿಸಿದ ಸ್ಪೈಪ್ ಮಶೀನುಗಳು ಇದ್ದವು. ಆದರೆ ಬ್ಯಾಂಕ್ ಗಳು ಸ್ಪೈಪ್ ಮಶೀನ್ ಮೇಲೆ ವಿಧಿಸುವ ಮಾಸಿಕ ಬಾಡಿಗೆ 1400 ರುಪಾಯಿ ಆಗಿದ್ದು ಈ ಮೊತ್ತ ಗ್ರಾಮದ ಸಣ್ಣ ಪುಟ್ಟ ಉದ್ಯಮಿಗಳಿಗೆ ತೀರಾ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೈಪ್ ಮಶೀನ್ ಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸುತ್ತಿದ್ದಾರೆ.