ಪಾರಂಪರಿಕ ಸ್ಥಳಗಳ ದತ್ತು ಯೋಜನೆ; ತಾಜ್ ಮಹಲ್ ಅನ್ನು ಕೇಳುವವರೇ ಇಲ್ಲ!

ವಿಶ್ವದ ಏಳು ಅದ್ಬುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಗೆ ತೀವ್ರ ಹಿನ್ನಡೆಯಾಗಿದ್ದು, ತಾಜ್ ಮಹಲ್ ಅನ್ನು ದತ್ತು ಪಡೆಯುವ ಸಂಬಂಧ ಯಾವುದೇ ಸಂಸ್ಛೆಗಳೂ ಮುಂದೆ ಬಂದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಪಾರಂಪರಿಕ ಸ್ಥಳಗಳ ನಿರ್ವಹಣೆ ಕುರಿತ ಕೇಂದ್ರ ಸರ್ಕಾರದ ದತ್ತು ಯೋಜನೆಯಲ್ಲಿ ವಿಶ್ವವಿಖ್ಯಾತ ಮತ್ತು ವಿಶ್ವದ ಏಳು ಅದ್ಬುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಗೆ ತೀವ್ರ ಹಿನ್ನಡೆಯಾಗಿದ್ದು, ತಾಜ್ ಮಹಲ್ ಅನ್ನು  ದತ್ತು ಪಡೆಯುವ ಸಂಬಂಧ ಯಾವುದೇ ಸಂಸ್ಛೆಗಳೂ ಮುಂದೆ ಬಂದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ.
ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ 'ಪರಂಪರೆಯನ್ನು ದತ್ತು ಪಡೆಯಿರಿ' ಯೋಜನೆಯಡಿಯಲ್ಲಿ ದೇಶದ ಪ್ರಮುಖ 14 ಪಾರಂಪರಿಕ ತಾಣಗಳ ನಿರ್ವಹಣೆಗೆ ಖಾಸಗಿಯವರು ದತ್ತು ಪಡೆಯುವಂತೆ ಮನವಿ ಮಾಡಲಾಗಿತ್ತು.  ಆದರೆ ವಿಶ್ವದ ಏಳು ಅದ್ಭುತಗಳ ಪೈಕಿ ಒಂದು ಎನಿಸಿರುವ ತಾಜ್‌ ಮಹಲ್ ದತ್ತು ಪಡೆಯಲು ಯಾರೂ ಮುಂದಾಗದಿರುವ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಖ್ಯಾತ ಐತಿಹಾಸಿಕ  ಪ್ರವಾಸಿ ಕೇಂದ್ರಗಳಾದ ದೆಹಲಿಯ ಕುತುಬ್ ಮಿನಾರ್, ಜಂತರ್ ಮಂತರ್, ಪುರಾನಾ ಕ್ವಿಲಾ, ಸಪ್ಧರ್‌ ಜಂಗ್ ಸಮಾಧಿ, ಅಗರ್‌ ಸೇನ್ ಕಿ ಬವೋಲಿ, ಒಡಿಶಾದ ಸೂರ್ಯ ದೇವಾಲಯ, ರತ್ನಗಿರಿ ಸ್ಮಾರಕ, ರಾಜರಾಣಿ ದೇವಾಲಯ,  ಹಂಪಿಯ ಪಳೆಯುಳಿಕೆಗಳು, ಲೆಹ್ ಅರಮನೆ, ಅಜಂತಾ ಮತ್ತು ಎಲ್ಲೋರಾ ಗವಿಗಳು, ಕೊಚ್ಚಿಯ ಮತ್ತಂಚೇರಿ ಅರಮನೆ, ಗಂಗೋತ್ರಿ ದೇವಾಲಯ ಆವರಣ ಹಾಗೂ ಗೋಮುಖ, ಲಡಾಖ್‌ನ ಸ್ಟಾಕ್ ಕಂಗ್ರಿ ಮತ್ತು ಆಗ್ರಾದ ತಾಜ್  ಮಹಲ್ ಅನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ದತ್ತು ನೀಡಲು ನಿರ್ಧರಿಸಲಾಗಿತ್ತು. 
ಈ ಮೇಲ್ಕಂಡ ಪ್ರದೇಶಗಳ ಪೈಕಿ ತಾಜ್ ಮಹಲ್ ಅನ್ನು ಹೊರತು ಪಡಿಸಿ ಉಳಿದ ಬಹುತೇಕ ಪ್ರದೇಶಗಳ ನಿರ್ವಹಣೆಗೆ ಏಳು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದವು. ಆದರೆ ತಾಜ್‌ಮಹಲ್ ನಿರ್ವಹಣೆಗೆ ಇಂಗಿತ ವ್ಯಕ್ತಪಡಿಸಿ  ಯಾವ ಖಾಸಗಿ ಸಂಸ್ಥೆಯೂ ಮುಂದೆ ಬಂದಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರವಾಸೋದ್ಯಮ ಕಾರ್ಯದರ್ಶಿ ರಶ್ಮಿ ವರ್ಮಾ ಅವರು, 'ಪರಂಪರೆಯನ್ನು ದತ್ತು ಪಡೆಯಿರಿ' ಯೋಜನೆಯಡಿಯಲ್ಲಿರುವ 14 ಪಾರಂಪರಿಕ ಸ್ಥಳಗಳ ನಿರ್ವಹಣೆ ಪೈಕಿ ತಾಜ್ ಮಹಲ್  ನಿರ್ವಹಣೆಗಾಗಿ ಯಾರೂ ಮುಂದೆ ಬಂದಿಲ್ಲ. ಈ ಸ್ಮಾರಕ ದತ್ತು ಪಡೆಯಲು ಇನ್ನೂ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com