ಇರಾನ್ ನ ಚಬಹರ್ ಬಂದರಿನಿಂದ ಅಫ್ಘಾನಿಸ್ತಾನ ಕ್ಕೆ ಗೋಧಿ ಪೂರೈಕೆಗೆ ಚಾಲನೆ ನೀಡಿದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಚ್.ಇ. ಸಲಾಹದ್ದೀನ್ ರಬ್ಬಾನಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿದೇಶಾಂಗ ಸಚಿವ ......
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಚ್.ಇ. ಸಲಾಹದ್ದೀನ್ ರಬ್ಬಾನಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿದೇಶಾಂಗ ಸಚಿವ ಎಚ್.ಇ.ಜಾವಾದ್ ಝರೀಫ್, ಇಂದು ಜಂಟಿ ವೀಡಿಯೋ ಕಾನ್ಫರೆನ್ಸ್ ಮೂಲಕ, ಭಾರತದಿಂದ ಅಫ್ಘಾನಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಇರಾನ್ ನ ಚಬಹಾರ್ ಬಂದರಿನ ಮೂಲಕ ಗೋಧಿ ಸಾಗಾಣಿಕೆಗೆ ಚಾಲನೆ ನೀಡಿದರು.
ಈ ಗೋಧಿ ಸಾಗಣೆಯು ಅಫ್ಘಾನಿಸ್ತಾನದ ಜನರಿಗಾಗಿ 1.1 ಮಿಲಿಯನ್ ಟನ್ ಗಳಷ್ಟು ಗೋಧಿ ಪೂರೈಸಲು ಭಾರತೀಯ ಸರ್ಕಾರವು ಮಾಡಿಕೊಂಡಿದ್ದ ಒಪ್ಪಂದದ ಒಂದು ಭಾಗವಾಗಿದೆ
2016 ರ ಮೇ ತಿಂಗಳಲ್ಲಿ ಇರಾನ್ ಗೆ ಭೇಟಿ ನೀಡಿದ್ದ ಭಾರತ ಪ್ರಧಾನ ಮಂತ್ರಿ ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾಗಾಟ ಕಾರಿಡಾರ್ ಸ್ಥಾಪನೆಯ ಮೇಲೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಚಬಹರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಸರಕು ಸಾಗಾಟ ನಡೆಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ ಆರು ಬಾರಿ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಲಾಗುವುದು. ಅಫ್ಘಾನಿಸ್ತಾನದ ಜನರ ಸಹಾಯಕ್ಕಾಗಿ ಮತ್ತು ಆ ದೇಶದ ಸಮೃದ್ಧಿಗಾಗಿ ತಮ್ಮ ಸರ್ಕಾರ ಬದ್ದವಾಗಿದೆ ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com