ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ನಿಮಿತ್ತ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ 'ರನ್ ಫಾರ್ ಯೂನಿಟಿ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಶೀಲ್ ಮೋದಿಯವರು, ಸರ್ದಾರ್ ಪಟೇಲರು ಬದುಕಿದಿದ್ದರೆ, ಕಾಶ್ಮೀರ ವಿವಾದ ಈ ಹಿಂದೆಯೇ ಬಗೆಹರಿಯುತ್ತಿತ್ತು. ನೆಹರೂ ಬದಲಾಗಿ ಪಟೇಲರೇ ದೇಶದ ಮೊದಲ ಪ್ರಧಾನಮಂತ್ರಿಗಳಾಗಿದ್ದರೆ, ಪ್ರಸ್ತುತ ಭಾರತದಲ್ಲಿರುವ ಸನ್ನಿವೇಶಗಳೇ ಬೇರೆಯೇ ಇರುತ್ತಿತ್ತು. ಸರ್ದಾರ್ ಪಟೇಲರು ಭಾರತದ ವಾಸ್ತುಶಿಲ್ಪಿಯಾಗಿದ್ದರು ಎಂದು ಹೇಳಿದ್ದಾರೆ.