ರಾಷ್ಟ್ರಗೀತೆಗಿಂತ ದೊಡ್ಡದು ಬೇರಾವುದು ಇಲ್ಲ. ರಾಷ್ಟ್ರಗೀತೆಯೊಂದಿಗೆ ದಿನವನ್ನು ಆರಂಭಿಸಿ ವಂದೇ ಮಾತರಂ ಹಾಡಿನೊಂದಿಗೆ ದಿನವನ್ನು ಅಂತ್ಯಗೊಳಿಸುವುದರಿಂದ ಧನಾತ್ಮಕ ಶಕ್ತಿ, ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ. ರಾಷ್ಟ್ರೀಯತೆಯು ಜನರ ಸೇವೆಯ ಅರ್ಥವನ್ನು ಪ್ರೇರೇಪಿಸುತ್ತದೆ. ದೇಶದಲ್ಲಿರುವ ಪ್ರತೀಯೊಂದು ಸರ್ಕಾರಿ ಕಾರ್ಯಾಲಯಗಳು ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ರಾಷ್ಟ್ರೀಯವಾದಿಗಳಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದಕ್ಕೆ ಸರಿಯಬಾರದು ಎಂದು ಜೈಪುರ ಮೇಯರ್ ಅಶೋಕ್ ಲೊಹ್ಟಿಯವರು ಹೇಳಿದ್ದಾರೆ.