ಅಂತೆಯೇ ಭಾರತ ವಿವಿಧತೆಯಲ್ಲಿ ಏಕತೆ ಎಂಬ ದ್ಯೇಯೋದ್ದೇಶದೊಂದಿಗೆ ಮುಂದೆ ಸಾಗುತ್ತಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆಯಾಗಿದೆ. ಆದರೆ ಈ ಸರ್ದಾರ್ ಪಟೇಲರ ಚಿಂತನೆಗಳು ನಿರ್ಲಕ್ಷಕ್ಕೀಡಾಗಿದ್ದವು. ಆದರೆ ದೇಶದ ಜನತೆ ಹಾಗೂ ಯುವಕರು ಅವರ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂದಿಗೂ ದೇಶದ ಯುವರಿಗೆ ಪಟೇಲರು ಸ್ಪೂರ್ತಿಯಾಗಿದ್ದು, ಅವರ ಚಿಂತನೆಗಳನ್ನು ಆದರ್ಶವಾಗಿ ಸ್ವೀಕರಿಸಿದ್ದಾರೆ. ಪಟೇಲರು ತಮ್ಮ ಚಿಂತನೆಗಳು, ಕೌಶಲ್ಯಗಳು, ಬದ್ಥತೆಗಳಿಂದ ದೇಶ ವಿಭಜನೆ ಬಳಿಕ ಆಗಬಹುದಾಗಿದ್ದ ಗಂಭೀರ ಸಮಸ್ಯೆಗಳಿಂದ ರಕ್ಷಿಸಿದ್ದಾರೆ. ಅಂತೆಯೇ ಭಾರತ ಮತ್ತೆ ಸಣ್ಣ ರಾಜ್ಯರಾಜ್ಯಗಳಾಗಿ ವಿಭಜನೆಯಾಗುವುದನ್ನು ತಡೆದಿದ್ದಾರೆ. ಅವರ ಇಂತಹ ಕಾರ್ಯಗಳೇ ಅವರನ್ನು ಇಂದು ದೇಶದ ಜನತೆ ಸ್ಪೂರ್ತಿಯಾಗಿ ಸ್ವೀಕರಿಸುವಂತೆ ಮಾಡಿದೆ.