ನೂತನವಾಗಿ ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿರುವ 9 ಮಂದಿ ಸಚಿವರಿಗೆ ಹಾಗೂ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದ ನಾಲ್ವರು ಕೇಂದ್ರ ಸಚಿವರಿಗೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಶುಭಕೋರಿದ್ದು, "ಟೀಂ ಮೋದಿ ತಂಡಕ್ಕೆ ಶುಭಾಶಯ. ಹೊಸ ಜವಾಬ್ದಾರಿಗಳನ್ನು ಹೊತ್ತಿದ್ದೀರಿ, ನಮ್ಮ ದೇಶವನ್ನು ಉತ್ತಮಗೊಳಿಸುವುದೇ ನಮ್ಮ ಸಾಮಾನ್ಯ ಯೋಜನೆಯಾಗಿದೆ ಎಂದು ಹೇಳಿದ್ದಾರೆ.