ಇದಕ್ಕೂ ಮೊದಲು ಮಹಿಳೆಯ ಕುಟುಂಬಸ್ಥರು ಸ್ಥಳೀಯ ಜಿಲ್ಲಾಡಳಿತ ಬಳಿ ಮೋರೆ ಹೋಗಿ ಆ್ಯಂಬುಲೆನ್ಸ್ ಗಾಗಿ ಮನವಿ ಮಾಡಿದ್ದಾರೆ. ಆದರೆ ಕುಗ್ರಾಮ ಬೆಟ್ಟ-ಗುಡ್ಡದ ನಡುವೆ ಇದ್ದು, ವಾಹನ ಸಂಚಾರಕ್ಕೆ ಪೂರಕವಾಗಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಬಳಿಕ ಕುಟುಂಬಸ್ಥರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಬಳಿ ಮೊರೆ ಮಾಡಿಕೊಂಡಿದ್ದು, ಇದಕ್ಕೆ ಕೂಡಲೇ ಸ್ಪಂದಿಸಿದ ಸೈನಿಕರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ.