ಕಳೆದ 20 ದಿನಗಳಲ್ಲಿ ದೇಶದಲ್ಲಿ ಆರು ರೈಲು ಅವಘಡ ಸಂಭವಿಸಿದ್ದು, ಪಿಯೂಷ್ ಗೋಯಲ್ ಅವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದ ಒಳಗೆ ಒಂದೇ ದಿನ ಎರಡು ರೈಲುಗಳು ಹಳಿ ತಪ್ಪಿರುವುದು ನೂತನ ಸಚಿವರನ್ನು ಚಿಂತೆಗೀಡುಮಾಡಿದೆ. ನಿರಂತರ ರೈಲು ಅವಘಡವಾದ ಹಿನ್ನಲೆಯಲ್ಲಿ ರೈಲ್ವೆ ಖಾತೆಯನ್ನು ಸುರೇಶ್ ಪ್ರಭು ಅವರಿಂದ ಬದಲಾವಣೆ ಮಾಡಲಾಗಿದೆ.