ದೇಶದಲ್ಲಿರುವ 30 ಕೋಟಿ ಜನರು ಅಕ್ಷರಸ್ಥರಾಗಿದ್ದು, ಅನಕ್ಷರತೆ ಎಂಬುದು ರಾಜಕೀಯ ವಿಚಾರವಲ್ಲ. ದೇಶದಲ್ಲಿನ ಅನಕ್ಷರತೆಯನ್ನು ತೊಡೆದು ಹಾಕಲು ಪ್ರತೀಯೊಬ್ಬ ನಾಗರೀಕರನೂ ಆಲೋಚನೆ ಮಾಡಬೇಕಿದೆ. ಅನಕ್ಷರತೆಯನ್ನು ದೂರಾಗಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಆಗಿಲ್ಲ. ಸಮಾಜದ ಜವಾಬ್ದಾರಿಯಾಗಿದೆ. ಬಡವನ ಉನ್ನತಿ, ರಾಜ್ಯ ಮತ್ತು ದೇಶದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುವುದಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾಗುತ್ತದೆ. ದೇಶವನ್ನು ಅಕ್ಷರಸ್ಥ ರಾಷ್ಟ್ರವಾಗಿಸಲು ಸರ್ಕಾರ ಸಾಕಷ್ಟು ಪರಿಶ್ರಮಗಳನ್ನು ಪಟ್ಟಿದ್ದರೂ ಶೇ.80 ರಷ್ಟು ಜನತೆ ಮಾತ್ರ ಅಕ್ಷರಸ್ಥರಾಗಿದ್ದಾರೆಂದು ತಿಳಿಸಿದ್ದಾರೆ.