ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಠಾಣೆಗಳಿಗೆ ಬುಲೆಟ್ ಪ್ರೂಫ್ ವಾಹನಗಳನ್ನು ನೀಡುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ನಮ್ಮ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ನೀಡಲಾಗುತ್ತದೆ. ಶೀಘ್ರದಲ್ಲಿಯೇ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಮಂಗಳವಾರ ಶೀಘ್ರದಲ್ಲಿ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದ ಎಎಸ್ಐ ಅಬ್ದುಲ್ ರಶೀದ್ ಕುರಿತಂತೆ ಮಾತನಾಡಿರುವ ಅವರು, ರಶೀದ್ ಅವರ ಮಗಳ ದುಃಖವನ್ನು ನೋಡುತ್ತಿದ್ದರೆ, ಬಹಳ ನೋವಾಗುತ್ತದೆ ಎಂದು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿರುವ ಸಂದೇಶ ಕುರಿತಂತೆ ಮಾತನಾಡಿರುವ ಅವರು ರಾಜನಾಥ ಸಿಂಗ್, ಯೋಧರ ತ್ಯಾಗ ಹಾಗೂ ಬಲಿದಾನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೆಚ್ಚಿಕೊಂಡಿದ್ದು, ಶೌರ್ಯವನನ್ನು ಕೊಂಡಾಡಿದ್ದಾರೆಂದು ತಿಳಿಸಿದ್ದಾರೆ.