ಜಮ್ಮು-ಕಾಶ್ಮೀರ: ಮತ್ತೊಬ್ಬ ಎಲ್ಇಟಿ ಉಗ್ರ ಪೊಲೀಸರಿಗೆ ಶರಣು

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರನೊಬ್ಬ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರನೊಬ್ಬ ಶರಣಾಗಿದ್ದಾನೆಂದು ಮಂಗಳವಾರ ತಿಳಿದುಬಂದಿದೆ. 
ನಿನ್ನೆ ಉತ್ತರ ಕಾಶ್ಮೀರದಲ್ಲಿ ನಡೆಸಲಾಗಿದ್ದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನೊಬ್ಬ ಭದ್ರತಾಪಡೆಗಳ ಮುಂದೆ ಶರಣಾಗಿದ್ದ. 
ಸ್ಥಳದಲ್ಲಿದ್ದ ಮನೆಯೊಂದರಲ್ಲಿ ಮತ್ತೊಬ್ಬ ಉಗ್ರ ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಈ ವೇಳೆ ಶರಣಾಗತಿಯಾದರೆ, ಯಾರೊಬ್ಬರು ಗುಂಡು ಹಾರಿಸುವುದಿಲ್ಲ ಎಂದು ಉಗ್ರನಿಗೆ ತಿಳಿಸಿತು. ಇದರಂತೆ ಉಗ್ರ ಶರಣಾಗಲು ಒಪ್ಪಿಕೊಂಡಿದ್ದ ಎಂದು ವರದಿಗಳಿ ತಿಳಿಸಿವೆ. 
ಶರಣಾಗತಿಯಾಗಿರುವ ಉಗ್ರನ್ನು ಆರೀಫ್ ಅಹ್ಮದ್ ಸೊಫಿ ಎಂಬು ಗುರ್ತಿಸಲಾಗಿದೆ. ಉಗ್ರ ಶರಣಾಗುತ್ತಿದ್ದಂತೆಯೇ ಆತನನ್ನು ಸ್ಥಳೀಯ ಪೊಲೀಸ್ ಕ್ಯಾಂಪ್ ಗೆ ಕರೆದೊಯ್ಯದಲಾಗಿದೆ. ಭದ್ರತಾ ಪಡೆಗಳು ಇದೀಗ ಆತನನ್ನು ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com