11 ಮಂದಿಯನ್ನು ಬಲಿ ಪಡೆದ ನರೋಡ ದೊಂಬಿ ಪ್ರಕರಣದ ಪ್ರಮುಖ ಆರೋಪಿ, ಗುಜರಾತ್ ಮಾಜಿ ಸಚಿವ ಮಾಯಾ ಕೊಡ್ನಾನಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಎಸ್ಐಟಿ ನ್ಯಾಯಾಧೀಶ ಪಿ ಬಿ ದೇಸಾಯಿ ಅವರು, ಸೆಪ್ಟೆಂಬರ್ 18ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಅಮಿತ್ ಶಾಗೆ ಸಮನ್ಸ್ ನೀಡಿದ್ದಾರೆ. ಅಲ್ಲದೆ ಒಂದು ವೇಳೆ ಶಾ ವಿಚಾರಣೆಗೆ ಹಾಜರಾಗದಿದ್ದರೆ ಮತ್ತೊಮ್ಮೆ ಸಮನ್ಸ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.