ಉದ್ಯೋಗದಲ್ಲಿನ ಮೀಸಲಾತಿಯನ್ನು ಈಗಿರುವ ಶೇ.49.5 ರಿಂದ ಶೇ.75 ರಷ್ಟಕ್ಕೆ ಏರಿಕೆ ಮಾಡಿ ಆರ್ಥಿಕ ಮಾನದಂಡದ ಆಧಾರದಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ನೀಡಬೇಕು ಎಂದು ಅಠಾವಳೆ ಹೇಳಿದ್ದಾರೆ. ಈಗಿರುವ ಮೀಸಲಾತಿಯನ್ನು ಶೇ.25 ರಷ್ಟು ಏರಿಕೆ ಮಾಡಬೇಕು, ಈ ಮೂಲಕ ಪಟೇಲ್, ರಜಪೂತ್, ಬ್ರಾಹ್ಮಣ, ಬನಿಯಾ, ಮರಾಠ ಸಮುದಾಯಗಳಿಗೂ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಸಿಗುವಂತಾಗಬೇಕು ಎಂದು ಅಠಾವಳೆ ಹೇಳಿದ್ದಾರೆ. ಅಠಾವಳೆ ಮಹಾರಾಷ್ಟ್ರದವರಾಗಿದ್ದು, ಪ್ರತ್ಯೇಕ ವಿದರ್ಭ ರಾಜ್ಯಕ್ಕೂ ಬೇಡಿಕೆ ಮುಂದಿಟ್ಟಿದ್ದಾರೆ.