ಮೇಲ್ಜಾತಿಗಳಿಗೂ ಮೀಸಲಾತಿ ನೀಡಿ: ಕೇಂದ್ರ ಸಚಿವ ಅಠಾವಳೆ

ಉದ್ಯೋಗದಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ಅಭಿಪ್ರಯಪಟ್ಟಿದ್ದಾರೆ.
ಕೇಂದ್ರ ಸಚಿವ ಅಠಾವಳೆ
ಕೇಂದ್ರ ಸಚಿವ ಅಠಾವಳೆ
ಅಹಮದಾಬಾದ್: ಉದ್ಯೋಗದಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ಅಭಿಪ್ರಯಪಟ್ಟಿದ್ದಾರೆ. 
ಉದ್ಯೋಗದಲ್ಲಿನ ಮೀಸಲಾತಿಯನ್ನು ಈಗಿರುವ ಶೇ.49.5 ರಿಂದ ಶೇ.75 ರಷ್ಟಕ್ಕೆ ಏರಿಕೆ ಮಾಡಿ ಆರ್ಥಿಕ ಮಾನದಂಡದ ಆಧಾರದಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ನೀಡಬೇಕು ಎಂದು ಅಠಾವಳೆ ಹೇಳಿದ್ದಾರೆ.  ಈಗಿರುವ ಮೀಸಲಾತಿಯನ್ನು ಶೇ.25 ರಷ್ಟು ಏರಿಕೆ ಮಾಡಬೇಕು, ಈ ಮೂಲಕ ಪಟೇಲ್, ರಜಪೂತ್, ಬ್ರಾಹ್ಮಣ, ಬನಿಯಾ, ಮರಾಠ ಸಮುದಾಯಗಳಿಗೂ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಸಿಗುವಂತಾಗಬೇಕು ಎಂದು ಅಠಾವಳೆ ಹೇಳಿದ್ದಾರೆ. ಅಠಾವಳೆ ಮಹಾರಾಷ್ಟ್ರದವರಾಗಿದ್ದು, ಪ್ರತ್ಯೇಕ ವಿದರ್ಭ ರಾಜ್ಯಕ್ಕೂ ಬೇಡಿಕೆ ಮುಂದಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com